ಥಿಯೇಟರ್ ಇಂಪ್ರೆಶನ್ಸ್

ಟ್ರ್ಯಾಜಿಡಿಯ ಬಹಳ ಮುಖ್ಯವಾದ ಅಂಕವೆಂದರೆ ಆರನೆಯ ಅಂಕ.
ರಂಗಮಂಚದ ಪುನರುಜ್ಜೀವನ.
ವಿಗ್ಗು, ಡ್ರೆಸ್ಸುಗಳನ್ನು ಸರಿಮಾಡಿಕೊಳ್ಳುವುದು,
ಎದೆಗೆ ಚುಚ್ಚಿದ ಚೂರಿಯನ್ನು ಕೀಳುವುದು,
ಕತ್ತಿಗೆ ಬಿಗಿದ ನೇಣು ಹಗ್ಗತೆಗೆಯುವುದು,
ಪ್ರೇಕ್ಷಕರಿಗೆ ಮುಖ ತೋರಿಸಲೆಂದು
ನಾಟಕದಲ್ಲಿ ಬದುಕಿದವರೊಡನೆ ಸತ್ತರೂ ಎದ್ದು ನಿಲ್ಲುವುದು.
ಪ್ರೇಕ್ಷಕರಿಗೆ ನಾಯಕರ ವಂದನೆ
ಸತ್ತನಾಯಕಿ ತನ್ನ ಬಿಳಿಯ ಕೈಯನ್ನು
ಎದೆಯ ಗಾಯಕ್ಕೆ ಮರೆಯಾಗಿ ಇಟ್ಟುಕೊಳ್ಳುತ್ತಾಳೆ.
ನೇಣಿಗೆ ಸಿಕ್ಕ ಕೊರಳು ಬಾಗಿ ನಮಿಸುತ್ತದೆ.
ಪ್ರೇಕ್ಷಕರಿಗೆ ಎಲ್ಲರ ನಮಸ್ಕಾರ…
ದುಷ್ಟತನ ಸಭ್ಯತೆಯ ಕೈ ಹಿಡಿಯುತ್ತದೆ.
ಶೂಲಕ್ಕೇರಿದವನು ಕೊಂದವನ ನೋಡಿ ನಗುತ್ತಾನೆ.
ಕ್ರಾಂತಿಕಾರಿ, ಇಷ್ಟೂ ಕೋಪವಿಲ್ಲದೆ,
ನಿರಂಕುಶನ ಬಳಿ ಸಾರಿ ಬೆನ್ನ ಮೇಲೆ ಕೈ ಇಡುತ್ತಾನೆ.
ಚಿನ್ನದ ಬಣ್ಣದ ಚಪ್ಪಲಿ ಅನಂತತೆಯತ್ತ ಹೆಜ್ಜೆಹಾಕುತ್ತದೆ.
ಬೀಸುತಿರುವ ಕೈಯಲ್ಲಿನ ಹ್ಯಾಟು ನೀತಿಯನ್ನು ಗುಡಿಸಿಹಾಕುತ್ತದೆ.
ನಾಳೆ ಮತ್ತೆಹೊಸದಾಗಲು ಎಲ್ಲ ಸಿದ್ಧ.
ಮೂರು, ನಾಲ್ಕನೆಯ ಅಂಕದಲ್ಲಿ ಮೊದಲು ಸತ್ತವರೆಲ್ಲ
ಒಬ್ಬರ ಹಿಂದೊಬ್ಬರು ಸಾಲಾಗಿ ಬರುತ್ತಾರೆ.
ಇಷ್ಟೂ ಸುಳಿವಿಲ್ಲದಂತೆ ಮಾಯವಾಗಿದ್ದವರು
ಪವಾಡವೆಂಬಂತೆ ಕಾಣಿಸಿಕೊಳ್ಳುತ್ತಾರೆ.
ಈ ಕ್ಷಣಕ್ಕಾಗಿಯೇ ಅವರೆಲ್ಲ
ಕಾಸ್ಟ್ಯೂಮು ತೆಗೆಯದೆ ಮೇಕಪ್ಪು ಅಳಿಸದೆ
ತಾಳ್ಮೆಯಿಂದ ಕಾಯುತ್ತಾ ಮರೆಯಲ್ಲಿ ನಿಂತಿದ್ದರಲ್ಲ
ಅದು ನನ್ನ ಮನಸ್ಸನ್ನು ಕರಗಿಸಿಬಿಡುತ್ತದೆ.
ಪರದೆ ಇಳಿಯುತ್ತಾ
ಇನ್ನೇನು ನೆಲ ಮುಟ್ಟುವ ಮೊದಲು
ಕಣ್ಣಿಗೆ ಒಂದಿಷ್ಟು ಕಾಣುತ್ತದಲ್ಲ
ಅದು ನಿಜವಾದ ರಸಾನುಭವ :
ಉದುರಿದ ಹೂವೆತ್ತಿಕೊಳ್ಳಲು ಆತುರದಿಂದ ಚಾಚುವ ಕೈ,
ಬಿದ್ದ ಕತ್ತಿ ಎತ್ತಿಕೊಳ್ಳಲು ಚಾಚುವ ಇನ್ನೊಂದು ಕೈ.
ಅದೃಶ್ಯವಾದ ಮೂರನೆಯ ಕೈ
ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತದೆ
ನನ್ನ ಕತ್ತು ಹಿಸುಕುತ್ತದೆ.
*****
ಮೂ: ವಿಸ್ಲಾವ ಝ್ಯಿಂಬೋಸ್ಕ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾ ಸೈ ನೀ ಸೈ
Next post ಟಿ ಎಸ್ ಏಲಿಯಟ್ ನ “ದಿ ವೇಸ್ಟ್ ಲ್ಯಾಂಡ್” ನಿಸ್ಸಾರ ಬದುಕಿನ ವ್ಯಾಖ್ಯಾನ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

cheap jordans|wholesale air max|wholesale jordans|wholesale jewelry|wholesale jerseys